Chief Editor
Manohar. R (Manu)
Photo Journalist
chitrataramanu@gmail.com
+91 9845549026
ದ್ವಿತೀಯ ಹಂತ ಮುಗಿಸಿದ ನಮ್ಮೂರ ಹೈಕ್ಳು
Posted date: 17 Sun, Jan 2016 – 10:17:10 AM

 ವಿ.ಪಿ.ಕಂಬೈನ್ಸ್ ಲಾಂಛನದಡಿಯಲ್ಲಿ ವಿ.ಶ್ರೀನಿವಾಸ್ (ನಾಗೇನಹಳ್ಳಿ) ನಿರ್ಮಿಸುತ್ತಿರುವ ನಮ್ಮೂರ ಹೈಕ್ಳು ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.

ಎಂಟು ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ಪವನ್ ಸುನಿಲ್, ತೇಜಸ್, ರಚಿತಾ ಅಣ್ಣಯ್ಯ ಭಾಗವಹಿಸಿದ ಹಲವಾರು ಸನ್ನಿವೇಶಗಳ್ನು ಹೆಸರಘಟ್ಟ, ಭೂಮಿಕಾ, ಸ್ಟುಡಿಯೋಸ್, ಪುಟ್ಟಣ್ಣ ಸ್ಟುಡಿಯೋಸ್‌ನಲ್ಲಿ ಮನು ಛಾಯಾಗ್ರಹಣದಲ್ಲಿ ನಿರ್ದೇಶಕ ಪ್ರಸನ್ನ ಚಿತ್ರಿಸಿಕೊಂಡರು.

ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದ್ದು, ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ಮನು ಛಾಯಾಗ್ರಹಣ, ಶಕೀಲ್ ಅಹಮ್ಮದ್ ಸಂಗೀತ, ಕಲೈ, ರಘು ನೃತ್ಯ, ವೇಣು ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಪ್ರಸನ್ನ ಚಿತ್ರದ ಸಹ ನಿರ್ಮಾಪಕರು ರಂಗರಾಜು ಹಾಸನ್.
 
ತಾರಾಗಣದಲ್ಲಿ ಮಜಾ ಟಾಕೀಸ್‌ನ ಪವನ್, ಕುರಿಸುನೀಲ್, ತೇಜಸ್ ರಘುಹಾಸನ್, ವಿನಯ್‌ರಾಮ್, ಮಮತಾ ರಾವುತ್, ದೀಪ್ತಿ ಮನ್ನೆ, ರಚಿತಾ, ಅಣ್ಣಯ್ಯ, ಸುಚೇಂದ್ರ ಪ್ರಸಾದ್, ರಮೇಶ್ ಭಟ್, ಎಂ.ಎಸ್. ಉಮೇಶ್, ಚಿಕ್ಕಣ್ಣ, ಬಿರಾದಾರ್ ಮುಂತಾದವರಿದ್ದು ವಿಶಿಷ್ಟ ಪಾತ್ರವೊಂದರಲ್ಲಿ ಸತ್ಯಜಿತ್ ಕಾಣಿಸಿಕೊಳ್ಳಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದ್ವಿತೀಯ ಹಂತ ಮುಗಿಸಿದ ನಮ್ಮೂರ ಹೈಕ್ಳು - Chitratara.com
Copyright 2009 chitratara.com Reproduction is forbidden unless authorized. All rights reserved.